ಕೋಳಿ ಕೂಗಿದರೇನೇ

ಕೋಳಿ ಕೂಗಿದರೇನೇ
ಬೆಳಗಾವುದೆಂಬ ಕಾಲವೊಂದಿತ್ತು|
ನನ್ನ ಮನೆ ಬೆಂಕಿಯಿಂದಲೇ
ಊರ ಜನರ ಬೇಳೆ ಬೇಯ್ಯುವುದೆಂಬ
ಅಜ್ಞಾನದ ಕಾಲವೊಂದಿತ್ತು||

ಎಲ್ಲರೂ ಸರ್ವ ಸ್ವತಂತ್ರರು
ಯಾರ ಹಿಡಿತದಲಿ ಯಾರಿಲ್ಲ|
ಅಜ್ಞಾನಿಗಳು ಅಜ್ಞಾನದಿಂದ
ಮುಗ್ಧರ ಆಳಬಯಸುವರು|
ಸತ್ಯವನೆಂದೂ ಮುಚ್ಚಿಡಲಾರರು
ಬೆಳಕ ಮುಷ್ಠಿಯಲಿಡಿಯಬಹುವುದೇ ? ||

ಸಕಲ ಜೀವ ಸಂಕುಲಕೆ
ಗಾಳಿ ಮಳೆ ಬೆಳಕು ಭಾಗ್ಯಗಳು
ಉಚಿತವಾಗಿ ಸಿಗುತ್ತಿರುವಾಗ
ಮಧ್ಯವರ್ತಿಗಳ ಭಯವೇಕೆ?
ಮತ್ತವರು ಬೇಕೇಕೆ?
ನಾವು ನಾವೇ ಒಬ್ಬರಿಗೊಬ್ಬರು
ಸ್ನೇಹ ಹಸ್ತವ ನೀಡಿ
ಉಪಯೋಗ ಲಭ್ಯವಾಗುತ್ತಿರಲು||

ಕಾಲ ಬಂದಿದೆ ಒಬ್ಬರನೊಬ್ಬರು
ಅರಿತು ಸಹಾಯದಿ ಬದುಕುವ|
ಮಿತವ್ಯಯ, ಮಿತ ಆಹಾರ ಪದ್ಧತಿ
ಆರೋಗ್ಯಕರ ಹಾಗೂ ಸುಸಂಸ್ಕೃತಿ|
ಬೇಡ ಅನ್ಯರ ಸ್ವತಂತ್ರವನಾಳುವ ಮತಿ
ಅವಶ್ಯಕತೆಯನರಿತು ಆಟವಾಡುವುದು,
ಸಮಯಸಾಧಕ ಬುದ್ಧಿ, ಹಸಿದವರೊಡನೆ ಸ್ಪರ್ದ್ಧಿ
ಅದು ನಿನಗೇ ಮಾರಕ, ಹಾನಿಕಾರಕ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಎಲೆ ಹೇಳಿದ್ದು
Next post ಇವುಗಳ ಪಾಲಿಸು

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

cheap jordans|wholesale air max|wholesale jordans|wholesale jewelry|wholesale jerseys